Friday, October 1, 2010

ರಾಮ ಜನ್ಮಭೂಮಿ - ಬಾಬರಿ ಮಸೀದಿ ವಿವಾದ ನನ್ನ ದೃಷ್ಟಿಯಲ್ಲಿ.

ರಾಮಜನ್ಮ ಭೂಮಿ - ಬಾಬ್ರಿ ಮಸೀದಿ ಜಾಗದ ಬಗ್ಗೆ ತೀರ್ಪು ಬರಲಿದೆ ಎಂದು ಮಾಧ್ಯಮಗಳಲ್ಲಿ ಪ್ರಸಾರವಾಗುವ ತನಕ ಹೀಗೊಂದು ವಿವಾದವಿದೆ ಎಂದೇ ನನಗೆ ಗೊತ್ತಿರಲಿಲ್ಲ. ಗೊತ್ತಾದ ಮೇಲೂ ಇದರ ಬಗ್ಗೆ ನನಗೆ ಯಾವ ಆಸಕ್ತಿಯೂ ಇರಲಿಲ್ಲ. ನಾನು ಹುಟ್ಟುವ ವೇಳೆಗೆ ಗಲಾಟೆ, ಹತ್ಯಾಕಾಂಡಗಳೆಲ್ಲಾ ಮುಗಿದೇ ಹೋಗಿತ್ತು. ಬುದ್ಧಿ  ಬೆಳೆಯುವ ವೇಳೆಗಾಗಲೇ ತೀರ್ಪು ಬರುವ ಸಮಯವಾಗಿತ್ತು. ನಾನು ಈ ವಿಷಯದಲ್ಲಿ ಧಾರ್ಮಿಕವಾಗಿಯಾಗಲೀ ಅಥವಾ ಭಾವನಾತ್ಮಕವಾಗಿಯಾಗಲೀ ತೊಡಗಿಸಿಕೊಳ್ಳಲೇ ಇಲ್ಲ. ಹೀಗಾಗಿ ಈ ತೀರ್ಪಿನಿಂದ ನನಗೆ ಸಂತೋಷವೂ ಆಗಿಲ್ಲ, ಬೇಸರವೂ ಆಗಿಲ್ಲ.

ತೀರ್ಪು ಬಂದ ಮೇಲೂ ಈ ವಿಷಯದ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಉಂಟಾಗಲಿಲ್ಲ. ಜನರಿಗೂ ಇದರ ಬಗ್ಗೆ ಕುತೂಹಲ ಇದ್ದ ಬಗ್ಗೆ ನಾಕಾಣೆ. ಯಾವುದೋ ಒಂದು ಪಂಗಡದ ಜನರನ್ನು ಒಲಿಸಿಕೊಳ್ಳಲು ರಾಜಕೀಯ ಪಕ್ಷಗಳು ಸುಮ್ಮನೇ ಈ ವಿಷಯವನ್ನು ದಾಳವಾಗಿಸಿಕೊಂಡಿವೆ ಅನಿಸುತ್ತದೆ. ತೀರ್ಪು ಬರುವ ಮೊದಲು ಹಾಗೂ ತೀರ್ಪು ಬಂದ ನಂತರ ಸುತ್ತ ಮುತ್ತಲ ಜನರಲ್ಲಿ ಯಾವುದೇ ರೀತಿಯ ಬದಲಾವಣೆಯನ್ನೂ ನಾನು ಗಮನಿಸಿಲ್ಲ.

ಅಲ್ಲಿರುವ ತುಂಡು ಭೂಮಿ ಯಾರಿಗೆ ಸೇರಿದರೇನು? ಆ ಜಾಗ ಭಾರತಕ್ಕೇ ಸೇರಿದ್ದಲ್ಲವೇ? ನಾವೆಲ್ಲರೂ ಭಾರತೀಯರಲ್ಲವೇ?

-ಪ್ರಸನ್ನ ಶಂಕರಪುರ


6 Comments:

Unknown said...

ಈ ಭಾವನೆ ಎಲ್ಲರಲ್ಲೂ ಬಂದರೆ 'utopia' ಅಥವಾ ರಾಮ ರಾಜ್ಯ ಎನ್ನುವ ಕಲ್ಪನೆ ಬಹಳ ಶೀಘ್ರವಾಗಿ ಬರಲಿದೆ. ಆದರೆ ಬರಬೇಕಲ್ಲ! :)

ಪ್ರಸನ್ನ ಶಂಕರಪುರ said...

ಜನರಲ್ಲಿ ಆ ಭಾವನೆ ಬಂದರೂ ರಾಜಕಾರಣಿಗಳಿಗೆ ಬರುವುದಿಲ್ಲ, ಅವರಿಗೆ ಬರುವುದೂ ಬೇಕಿಲ್ಲ. ಬೇಕಿರುವುದು ವೋಟು ಮಾತ್ರಾ.

ಧನ್ಯವಾದಗಳು.

Narendra Kumar said...

ನಮ್ಮ ದೇಶದ ವಿದ್ಯಾವಂತರು ಎಲ್ಲಿಯವರೆಗೆ, ದೇಶಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಈ ರೀತಿಯಾಗಿ ಉದಾಸೀನರಾಗಿ ಇರುತ್ತಾರೆಯೋ, ಅಲ್ಲಿಯವರೆಗೆ ಇಂತಹ ಸಮಸ್ಯೆಗಳು ಪರಿಹಾರವಾಗುವುದಿಲ್ಲ.
ಪಾಕಿಸ್ತಾನ-ಬಾಂಗ್ಲಾದೇಶಗಳು ನಮ್ಮ ಕಣ್ಣ ಮುಂದೆ ಹುಟ್ಟಿಲ್ಲ. ನಾವು ಕಣ್ಣು ಬಿಡುವ ಹೊತ್ತಿಗೆ ಅದಕ್ಕೆ ಸಂಬಂಧಿಸಿದ ಹತ್ಯಾಕಾಂಡಗಳೆಲ್ಲಾ ಮುಗಿದಿವೆ. ಆ ಪ್ರದೇಶಗಳೂ ಈ ಭೂಮಿಗೇ ಸೇರಿವೆ. ನನಗೇಕೆ ಅದರ ಉಸಾಬರಿ. ಈ ರೀತಿಯಾಗಿ ನಾವು ಯೋಚಿಸಬಹುದು.
ಇದರ ಅರ್ಥವೆಂದರೆ, ನಾವು ಇತಿಹಾಸದಿಂದ ಪಾಠ ಕಲಿಯಲು ಉತ್ಸುಕರಾಗಿಲ್ಲ.
ಇತಿಹಾಸದಿಂದ ಪಾಠ ಕಲಿಯದಿದ್ದರೆ, ಇತಿಹಾಸ ಮರುಕಳಿಸುತ್ತದೆ.
ಪಾಕಿಸ್ತಾನ-ಬಾಂಗ್ಲಾಗಳು ಹುಟ್ಟಿದ ಕಥೆ ತಿಳಿಯದಿದ್ದರೆ, ಮತ್ತೊಂದು ಪಾಕಿಸ್ತಾನ-ಬಾಂಗ್ಲಾಗಳ ಹುಟ್ಟನ್ನು ಕಾಣಬೇಕಾಗಬಹುದು.

ಅಯೋಧ್ಯೆ-ಕಾಶಿ-ಮಥುರಾ ಇವುಗಳ ಕಥೆ ತಿಳಿಯದಿದ್ದರೆ, ಮತ್ತಷ್ಟು ದೇವಾಲಯಗಳು ಆ ಸ್ಥಿತಿಗೆ ಬರುವುದಕ್ಕೆ ಸಾಕ್ಷಿಗಳಾಗಬಹುದು.
ಸೋಮನಾಥದ ಮಸೀದಿ ದೇವಸ್ಥಾನವಾದ ಕಥೆ ತಿಳಿಯದಿದ್ದರೆ, ಅದನ್ನು ದೇವಸ್ಥಾನವನ್ನಾಗಿ ಯಾರು ಮಾಡಿದರೆಂಬುದನ್ನು ತಿಳಿಯದಿದ್ದರೆ, ಅಯೋಧ್ಯೆಯಲ್ಲಿ ದೇವಸ್ಥಾನ ಏಟಕ್ಕಾಗಿ ಎಂಬುದು ತಿಳಿಯುವುದಿಲ್ಲ.

ಪ್ರಸನ್ನ ಶಂಕರಪುರ said...

ತಮ್ಮ ಅಮೂಲ್ಯ ಪ್ರತಿಕ್ರಿಯೆಗೆ ಧನ್ಯವಾದಗಳು. ಈ ಬರಹವನ್ನು ಬರೆದ ಮೇಲೆ ನನ್ನ ದೃಷ್ಟಿಕೋನದಲ್ಲಿ ಸಾಕಷ್ಟು ಬದಲಾವಣೆಗಳಾಗಿದೆ, ಈಗೀಗ ನಾನು ಯೋಚಿಸುವ ರೀತಿಯನ್ನು ಬದಲಾಯಿಸಿಕೊಳ್ಳುತ್ತಿದ್ದೇನೆ.

-ಪ್ರಸನ್ನ.ಎಸ್.ಪಿ

Narendra Kumar said...

I am happy to know that you are changing and changing for better!

ಪ್ರಸನ್ನ ಶಂಕರಪುರ said...

Thank you for your support Narendra :-)

Post a Comment