ಚಾಮರಾಜನಗರಕ್ಕೆ ಬರುವ ರಾಜ್ಯದ ಮುಖ್ಯಮಂತ್ರಿಗಳು ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ (ಮೂಢ)ನಂಬಿಕೆಯಿದೆ. ಮುಖ್ಯಮಂತ್ರಿಗಳಿರಲಿ, ಮಂತ್ರಿಗಳು ಹಾಗೂ ಅಧಿಕಾರಿಗಳೂ ಸಹ ಅಲ್ಲಿಗೆ ಕಾಲಿಡಲು ಹೆದರುತ್ತಾರೆ. ಈಗ ಅಲ್ಲಿಗೆ ತಗುಲಿರುವ ಶಾಪ(?)ವನ್ನು ಕಳೆಯಲು ಅಷ್ಟಮಂಗಳ ಪ್ರಶ್ನೆ ನಡೆಸಿ, ತೊಂದರೆಗಳನ್ನು ಪರಿಹರಿಸಿ ನಂತರ ಸದಾನಂದಗೌಡರನ್ನು ಚಾಮರಾಜನಗರಕ್ಕೆ ಕರೆಸುವ ಯೋಜನೆಗಳು ನಡೆಯುತ್ತಿದೆ. ಇದರ ಜೊತೆಗೇ ಕೇಳಿ ಬರುತ್ತಿರುವ ಇನ್ನೊಂದು ಸುದ್ದಿಯೆಂದರೆ ಶ್ರೀರಾಮುಲು ಅವರಿಂದ ಹೊಸ ಪಕ್ಷ ರಚನೆ. ಹೌದು, ಸುದ್ದಿಮೂಲಗಳ ಪ್ರಕಾರ ಶ್ರೀರಾಮುಲು ಅವರು ನಾಳೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವುದು ಬಹುತೇಕ ಖಚಿತ. ಅಲ್ಲದೇ ಸಧ್ಯದಲ್ಲಿಯೇ ಹೊಸ ಪಕ್ಷವನ್ನೂ ಕಟ್ಟಲಿದ್ದಾರಂತೆ. ಅದು ನಿಜವೇ ಆದರೆ ಶ್ರೀರಾಮುಲು ಬೆಂಬಲಿಗ ಶಾಸಕರೂ ಕೂಡ ಬಿಜೆಪಿ ತೊರೆಯುವುದರಲ್ಲಿ ಯಾವುದೇ ಅನುಮಾನವಿಲ್ಲ. ಹಾಗಾದಲ್ಲಿ ರಾಜ್ಯದಲ್ಲಿ ಅಸ್ಥಿತ್ವದಲ್ಲಿರುವ ಡಿ.ವಿ.ಸದಾನಂದಗೌಡ ನೇತೃತ್ವದ ಬಿಜೆಪಿ ಸರ್ಕಾರ ಬಹುಮತ ಕಳೆದುಕೊಳ್ಳಲಿದೆ.
ಆದ್ದರಿಂದ ಮಾನ್ಯ ಮುಖ್ಯಮಂತ್ರಿಗಳಿಗೆ ನನ್ನದೊಂದು ವಿನಂತಿ, ನಿಮ್ಮ ಚಾಮರಾಜನಗರ ಭೇಟಿಯನ್ನು ಸ್ವಲ್ಪ ದಿನದ ಮಟ್ಟಿಗೆ ಮುಂದೂಡಿ. ಒಂದು ವೇಳೆ ನೀವು ಚಾಮರಾಜನಗರಕ್ಕೆ ಭೇಟಿ ನೀಡಿದ ಸಮಯದಲ್ಲಿಯೇ ಶ್ರೀರಾಮುಲು ಮತ್ತವರ ಬೆಂಬಲಿಗ ಶಾಸಕರಿಂದ ನಿಮ್ಮ ಸರ್ಕಾರ ಬಹುಮತ ಕಳೆದುಕೊಂಡರೆ ಆಗ ಚಾಮರಾಜನಗರದ ಬಗ್ಗೆ ಇರುವ ಮೂಢನಂಬಿಕೆ ಮತ್ತೊಮ್ಮೆ ನಿಜವಾಗುತ್ತದೆ. ಹಾಗಾಗದಿರಲಿ ಎನ್ನುವುದು ಎಲ್ಲರ ಆಶಯ.
ಆದ್ದರಿಂದ ಮಾನ್ಯ ಮುಖ್ಯಮಂತ್ರಿಗಳಿಗೆ ನನ್ನದೊಂದು ವಿನಂತಿ, ನಿಮ್ಮ ಚಾಮರಾಜನಗರ ಭೇಟಿಯನ್ನು ಸ್ವಲ್ಪ ದಿನದ ಮಟ್ಟಿಗೆ ಮುಂದೂಡಿ. ಒಂದು ವೇಳೆ ನೀವು ಚಾಮರಾಜನಗರಕ್ಕೆ ಭೇಟಿ ನೀಡಿದ ಸಮಯದಲ್ಲಿಯೇ ಶ್ರೀರಾಮುಲು ಮತ್ತವರ ಬೆಂಬಲಿಗ ಶಾಸಕರಿಂದ ನಿಮ್ಮ ಸರ್ಕಾರ ಬಹುಮತ ಕಳೆದುಕೊಂಡರೆ ಆಗ ಚಾಮರಾಜನಗರದ ಬಗ್ಗೆ ಇರುವ ಮೂಢನಂಬಿಕೆ ಮತ್ತೊಮ್ಮೆ ನಿಜವಾಗುತ್ತದೆ. ಹಾಗಾಗದಿರಲಿ ಎನ್ನುವುದು ಎಲ್ಲರ ಆಶಯ.
ಕಾದು ನೋಡೋಣ
ReplyDelete